ಸುಳ್ಯ: ರಾಜಕೀಯ ನಿವೃತ್ತಿ ಹೇಳಿಕೆ ವಾಪಸ್ ➤ ಸಚಿವ ಎಸ್. ಅಂಗಾರ

(ನ್ಯೂಸ್ ಕಡಬ)newskadaba.com ಸುಳ್ಯ, ಏ.14. ರಾಜಕೀಯ ನಿವೃತ್ತಿ ಹೇಳಿಕೆ ಟಿಕೆಟ್ ಸಿಗದ ಕಾರಣ ತತ್ ಕ್ಷಣದ ನೋವಾಗಿತ್ತು. ಆದರೆ ಇದೀಗ ನನ್ನ ಹೇಳಿಕೆ ಹಿಂಪಡೆಯುತ್ತಿದ್ದು, ಸಕ್ರೀಯ ರಾಜಕೀಯದಲ್ಲಿದ್ದುಕೊಂಡು ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಕೊಂಡು ಪೂರಕ ಕೆಲಸ ಮಾಡುತ್ತೇನೆ ಎಂದು ಸಚಿವ ಎಸ್.ಅಂಗಾರ ತಿಳಿಸಿದರು.


ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ, ಆದರೆ ನನಗೆ ಹೇಳದೆ ಆಯ್ಕೆ ಮಾಡಿರುವುದು ನೋವುಂಟಾಗಿತ್ತು. ಇದು ತತ್ ಕ್ಷಣದ ನೋವಷ್ಟೇ..ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆಯುತ್ತೇನೆ. 7 ಬಾರಿ ಸ್ಪರ್ಧೆ ಮಾಡಿದಾಗಲೂ ನಾನೆಂದೂ ಟಿಕೆಟ್ ಗಾಗಿ ಲಾಬಿ ಮಾಡಿದವನಲ್ಲ ಪಕ್ಷವೇ ಅವಕಾಶ ನೀಡಿತ್ತು ಎಂದು ಅವರು ತಿಳಿಸಿದ್ದಾರೆ.

Also Read  10ನೇ ತರಗತಿ ವಿದ್ಯಾರ್ಥಿ ಜೊತೆ ಶಿಕ್ಷಕಿ ಪರಾರಿ      ➤  ಪ್ರಕರಣ ದಾಖಲು.!

error: Content is protected !!
Scroll to Top