RCB ತಂಡಕ್ಕೆ ಕನ್ನಡಿಗ ಸೇರ್ಪಡೆ

(ನ್ಯೂಸ್ ಕಡಬ)newskadaba.com ಬೆಂಗಳೂರು,  ಏ.10. RCB ತಂಡಕ್ಕೆ ಕನ್ನಡಿಗ ಸೇರ್ಪಡೆಯಾಗಿದೆ. ರಜತ್ ಪಾಟಿದಾರ್ ಬದಲಾಗಿ ವೇಗಿ ವೈಶಾಕ್ ವಿಜಯ್ ಕುಮಾರ್ ಅವರು, ಮೂಲಬೆಲೆ ೨೦ ಲಕ್ಷಕ್ಕೆ ಬೆಂಗಳೂರು ತಂಡ ಸೇರ್ಪಡೆಯಾಗಿದ್ದಾರೆ.

ದೇಶಿಯ ಕ್ರಿಕೆಟ್ ನಲ್ಲಿ ಕರ್ನಾಟಕ ಪ್ರತಿನಿಧಿಸುವ ವೈಶಾಕ್, ಇದುವರೆಗೆ 14ಟಿ20 ಪಂದ್ಯಗಳನ್ನಾಡಿದ್ದು , 22 ವಿಕೆಟ್ ಕಬಳಿಸಿದ್ದಾರೆ. ಹಿಮ್ಮಡಿ ಗಾಯಕ್ಕೆ ಒಳಗಾಗಿರುವ ಪಾಟಿದಾರ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಐಪಿಎಲ್ ಸರಣಿಯಿಂದಲೇ ಹೊರಗುಳಿದಿದ್ದಾರೆ.

ಪಾಟಿದಾರ್ ಹಿಮ್ಮಡಿ ನೋವಿನಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಬಾರಿಯಾದರೂ ಕನ್ನಡಿಕ ಪ್ಲೇಯಿಂಗ್ ಇಲೆವನ್ ನಲ್ಲಿ ಸ್ಥಾನ ಸಿಗುತ್ತಾ ಕಾದು ನೋಡಬೇಕು.

 

 

 

error: Content is protected !!

Join the Group

Join WhatsApp Group