ಹಾವನ್ನು ಹಿಡಿದು ಹಿಂಸಿಸಿ ಕೊಂದ ಯುವಕರು ಅರೆಸ್ಟ್

(ನ್ಯೂಸ್ ಕಡಬ)newskadaba.com ಚೆನ್ನೈ, ಏ.06. ತಮಿಳುನಾಡಿನ ಕೈನೂರುನಲ್ಲಿ ಹಾವಿಗೆ ಹಿಂಸೆ ನೀಡಿದ ಆರೋಪದ ಮೇಲೆ ಮೂವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಮೋಹನ್, ಸೂರ್ಯ ಮತ್ತು ಸಂತೋಷ್ ಬಂಧಿತ ಆರೋಪಿಗಳಗಿದ್ದು, ಅವರು ಹಾವೊಂದನ್ನು ಹಿಡಿದು ಅದನ್ನು ಹಿಂಸಿಸಿ ಅದರ ಸಾವಿಗೆ ಕಾರಣರಾಗಿದ್ದಾರೆ.

ಮೋಹನ್‌ ಎಂಬಾತ ಕೈಯಲ್ಲಿ ಹಾವು ಹಿಡಿದುಕೊಂಡಿದ್ದು, ಹಾವು ಮೋಹನ್‌ ಕೈಗೆ ಕಚ್ಚಿದೆ. ಇದಕ್ಕೆ ಮೋಹನ್‌ ಹಾವು ನನ್ನ ಕೈಗೆ ಕಚ್ಚಿದೆ. ನಾನು ಅದರ ಸೇಡು ತೀರಿಸಿಕೊಳ್ಳಬೇಕೆಂದು ಹಾವಿನ ತಲೆ ಕಚ್ಚಿದ್ದಾನೆ ಎನ್ನಲಾಗಿದೆ. ಇತರರು ಹಾವನ್ನು ಬಿಡು ಎಂದಿದ್ದಾರೆ. ಆದರೆ ಮೋಹನ್‌ ಹಾವಿನ ತಲೆಯನ್ನು ಕಚ್ಚಿ, ಹಿಂಸಿಸಿ ಅದನ್ನು ಸಾಯಿಸಿದ್ದಾನೆ ಎಂದು ವರದಿ ತಿಳಿಸಿದೆ.

 

error: Content is protected !!
Scroll to Top