30 ಕೋಟಿ ಆಸ್ತಿ ಇದ್ದರೂ ಹೆತ್ತವರಿಗೆ ಊಟ ಹಾಕದ ಮಗ   ➤ ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ಮಗನ ಬಳಿ 30 ಕೋಟಿ ರೂ. ಆಸ್ತಿ ಇದೆ. ಆದರೆ ನಮಗೆ ಎರಡು ಹೊತ್ತು ಊಟ ಕೂಡ ಸರಿಯಾಗಿ ಕೊಡುತ್ತಿಲ್ಲ, ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಅಮಾನವೀಯ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

 

ಚಕ್ರಿ ದಾದಿ ಬಳಿಯ ಬಾಂದ್ರಿಯ ಶಿವ ಕಾಲೋನಿ ನಿವಾಸಿಗಳಾದ ಜಗದೀಶ್ ಚಂದ್ರ ಆರ್ಯಾ (78) ಮತ್ತು ಭಾಗ್ಲಿ ದೇವಿ (77) ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪೊಲೀಸರಿಗೆ ಕರೆ ಮಾಡಿ ವೃದ್ಧ ದಂಪತಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು.

 

 

 

 

 

 

error: Content is protected !!

Join the Group

Join WhatsApp Group