‘ಜೈಲಿಗೆ ಹೋಗಲು ನಾನು ಹೆದರುವುದು ಇಲ್ಲ’    ➤ ಅಮೃತಪಾಲ್ ಸಿಂಗ್‌

(ನ್ಯೂಸ್ ಕಡಬ)newskadaba.com ಅಮೃತಸರ, ಮಾ.31. ನನ್ನ ಬಂಧನಕ್ಕೆ ಸಂಬಂಧಿಸಿ ನಾನು ಯಾವ ಡಿಮ್ಯಾಂಡ್‌ ಅನ್ನೂ ಮಾಡಿಲ್ಲ. ಜೈಲಿಗೆ ಹೋಗಲು ನಾನು ಹೆದರುವುದೂ ಇಲ್ಲ ಎಂದು ಕಳೆದ 13 ದಿನಗಳಿಂದ ತಲೆಮರಿಸಿಕೊಂಡಿರುವ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್‌ನದ್ದು ಎನ್ನಲಾದ ಆಡಿಯೋವೊಂದು ಪಂಜಾಬ್‌ ನಾದ್ಯಂತ ಹರಿದಾಡುತ್ತಿದೆ.

ಅಮೃತ್‌ಪಾಲ್‌ ಪ್ರಕರಣದ ವೇಳೆ ಬಂಧಿತರಾಗಿದ್ದ 360 ಯುವಕರ ಪೈಕಿ 348 ಮಂದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದ್ದು, ಉಳಿದವರನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪಂಜಾಬ್‌ ಸರಕಾರ ಭರವಸೆ ನೀಡಿದೆ ಎಂದು ಸಿಕ್ಖ್ರ ಪರಮೋಚ್ಚ ಸಂಸ್ಥೆ ಅಕಾಲ್‌ ತಖ್ತ್ ಹೇಳಿದೆ.

Also Read  'ಉಗ್ರ ಸಂಘಟನೆ ಲಷ್ಕರ್' ಪರ ಬರಹ ➤ ಮಂಗಳೂರು ನಗರದಲ್ಲಿ ವಿ.ಹಿಂ.ಪ ಪ್ರತಿಭಟನೆ

 

error: Content is protected !!
Scroll to Top