ಮಂಗಳೂರು 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.30. ಮಂಗಳೂರು ಯುವಕನೋರ್ವ ವಸತಿ ಸಮುಚ್ಚಯದ 14ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು, ಮೃತಪಟ್ಟ ಘಟನೆ ಇಂದು ಮುಂಜಾನೆ ನಗರದ ಕದ್ರಿಯಿಂದ ವರದಿಯಾಗಿದೆ.

ಮೊಬೈಲ್ ಕೇರ್ ಅಬ್ದುಲ್ ಸಲೀಂ ಎಂಬವರ ಪುತ್ರ ಮುಹಮ್ಮದ್ ಶಮಾಲ್ (21) ಮೃತಪಟ್ಟವರು. ರಮಝಾನ್ ಉಪವಾಸದ ಹಿನ್ನೆಲೆಯಲ್ಲಿ ಸಹರಿ ಉಪಾಹಾರ ಸೇವಿಸಿದ ಬಳಿಕ ಫ್ಲ್ಯಾಟ್ ನ ಬಾಲ್ಕನಿಗೆ ಹೋಗಿದ್ದ ಶಮಾಲ್ ನಿದ್ದೆಗಣ್ಣಿನಲ್ಲಿ ಆಯತಪ್ಪಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.  ಘಟನಾ ಸ್ಥಳಕ್ಕೆಕದ್ರಿ ಠಾಣಾ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!

Join the Group

Join WhatsApp Group