ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಹೊಡೆದಾಟ ► ಜೈಲರ್ ಸೇರಿ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.08. ಓರ್ವ ಕೈದಿಯನ್ನು ಇನ್ನೋರ್ವ ಕೈದಿ ಗುರಾಯಿಸಿ ನೋಡಿದ್ದಾನೆ ಎಂಬ ಕಾರಣಕ್ಕಾಗಿ ಕೈದಿಗಳು ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಇಬ್ಬರು ಕೈದಿಗಳು ಹಾಗೂ ಹೊಡೆದಾಟವನ್ನು ಬಿಡಿಸಲು ಹೋಗಿದ್ದ ಜೈಲರ್‌
ಗಾಯಗೊಂಡಿದ್ದು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರದಂದು ಸಂಜೆ ಸಂದರ್ಶನ ಸಮಯದಲ್ಲಿ ಓರ್ವ ಕೈದಿ ಇನ್ನೋರ್ವನನ್ನು ಗುರಾಯಿಸಿ ನೋಡಿದ್ದ ಎಂದು ಕೈದಿಗಳು ಹೊಡೆದಾಡಿಕೊಂಡಿದ್ದು, ಈ ವೇಳೆ ಇವರನ್ನು ಬಿಡಿಸಲು ಹೋದ ಜೈಲರ್ ಎಸ್.ಬಿ.ಪಾಟೀಲ್ ಅವರ ಎಡಗೈಗೆ ಗಾಯವಾಗಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.

Also Read  ಖ್ಯಾತ ವೈದ್ಯ ಡಾ| ಸುಗುಣ ಗೌಡ ಮಿತ್ತಮಜಲು ನಿಧನ

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top