‘ಕೈ’ ಸಂಸದರೆಲ್ಲರ ರಾಜೀನಾಮೆ.?                                                    ➤ ಪಕ್ಷದ ಮುಂದೆ ಪ್ರಸ್ತಾವವಿಟ್ಟ ಯುವ ಎಂ.ಪಿಗಳು

(ನ್ಯೂಸ್ ಕಡಬ)newskadaba.comವದೆಹಲಿ: ಮಾ,29 ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಬಳಿಕ ಸುದೀರ್ಘ ರಾಜಕೀಯ ಹೋರಾಟಕ್ಕೆ ಪಕ್ಷವು ಸಜ್ಜಾಗಿದೆ. ರಾಹುಲ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದನ್ನು ಖಂಡಿಸಿ ಪಕ್ಷದ ಎಲ್ಲ ಸಂಸದರೂ ರಾಜೀನಾಮೆ ನೀಡಬೇಕು ಎಂಬ ಸಲಹೆಯನ್ನು ಕೆಲವು ಯುವ ಸಂಸದರು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.ರವನೀತ್ ಬಿಟ್ಟು ಅವರು, ಪಕ್ಷದ ಮುಖಂಡರು  ನಡೆಸಿದ ಸಭೆಯಲ್ಲಿ ಮೊದಲ ಬಾರಿಗೆ ಈ ವಿಚಾರವನ್ನು ಮುಂದಿಟ್ಟಿದ್ದಾರೆ.

ಅನರ್ಹತೆಯ ಅಧಿಸೂಚನೆ ಪ್ರಕಟವಾದ ಕೆಲವೇ ತಾಸುಗಳಲ್ಲಿ ಈ ಸಭೆ ನಡೆದಿತ್ತು. ಬಿಟ್ಟು ಅವರು ಮುಂದಿಟ್ಟ ಪ್ರಸ್ತಾವವನ್ನು ಪಕ್ಷದ ಸಂಸದ ಮಾಣಿಕಂ ಟ್ಯಾಗೋರ್‌ ಬೆಂಬಲಿಸಿದರು.ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದರು.

Also Read  ಇನ್ಮುಂದೆ ಲಘು ವಾಹನಗಳಿಗಿಲ್ಲ ಟೋಲ್- ಸರಕಾರದಿಂದ ಮಹತ್ತರ ನಿರ್ಧಾರ

 

 

 

 

 

 

 

error: Content is protected !!
Scroll to Top