ಬೆಂಗಳೂರಿನಲ್ಲಿ ಕಾಲೋಚಿತ ಜ್ವರ ಹೆಚ್ಚಳ…!            ➤ ಮಕ್ಕಳು & ವೃದ್ಧರು ಎಚ್ಚರ ವಹಿಸಲು ವೈದ್ಯರ ಸೂಚನೆ

(ನ್ಯೂಸ್ ಕಡಬ)newskadaba.com  ಬೆಂಗಳೂರು:ಮಾ,27  ರಾಜ್ಯದೆಲ್ಲೆಡೆ ಕಾಲೋಚಿತ ಜ್ವರ ಪ್ರಕರಣಗಳು ಹೆಚ್ಚಾಗಿದ್ದು, ಅದರಲ್ಲೂ ಐಟಿಸಿಟಿ ಬೆಂಗಳೂರಲ್ಲಿ ಏರಿಕೆಯಾಗ್ತಿದೆ. ಮಕ್ಕಳು & ವೃದ್ಧರಿಗೆ ವೈದ್ಯರ ಎಚ್ಚರಿಕೆ ಅನುಸರಿಸಬೇಕಾಗಿದೆ. ಇದೀಗ ಕಾಲೋಚಿತ ಜ್ವರಗಳು ದಿನದಿಂದ ದಿನಕ್ಕೆ ಹೆಚ್ಚಳಗೊಂಡಿದ್ದು, ಇದೀಗ ಸಿಲಿಕಾನ್‌ ಸಿಟಿ ಜನರಿಗೆ ಹೊಸ ಆತಂಕ ಸೃಷ್ಟಿಯಾಗಿದೆ.

ಮೊದಲು ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡು ಬಳಿಕ ನೆಗಡಿ ಮತ್ತು ಕೆಮ್ಮು ಕಾಣಿಸಿಕೊಳ್ಳುತ್ತದೆ. ಕರ್ನಾಟಕ ಆರೋಗ್ಯ ಇಲಾಖೆಯ ಆಯುಕ್ತ ಡಿ ರಂದೀಪ್ ಕಾಲೋಚಿತ ಜ್ವರ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ.

ರೋಗ ಉಲ್ಬಣಗೊಂಡಲ್ಲಿ ಮಕ್ಕಳು & ವೃದ್ಧರಿಗೆ ವೈದ್ಯರ ಸೂಕ್ತ ಸಲಹೆಯನ್ನು ಪಡೆದು ಚಿಕಿತ್ಸೆಗಳನ್ನು ಪಡೆಯಿರಿ ಎಂದು ಸೂಚನೆ ನೀಡಲಾಗಿದೆ. ಸ್ವಲ್ಪ ಯಾಮಾರಿದ್ರೂ ಕಾಲೋಚಿತ ಜ್ವರಗಳು ಆರೋಗ್ಯವನ್ನೆ ಹದಗೆಡಿಸಬಹುದಾಗಿದೆ.

Also Read  ಮೈಸೂರು: 25 ಕೆ.ಜಿ ಆನೆದಂತ ವಶ ➤ ನಾಲ್ವರು ಆರೋಪಿಗಳ ಬಂಧನ

 

 

error: Content is protected !!
Scroll to Top