ಸ್ನೇಹಿತರೊಂದಿಗೆ ಈಜಲು ಹೋಗಿ ದಾರುಣ ಅಂತ್ಯ ಕಂಡ ಬಾಲಕ ➤ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

(ನ್ಯೂಸ್ ಕಡಬ) newskadaba.com.ಬೆಂಗಳೂರು. ಮಾ. 18.ಗ್ಗೆರಿ ನಿವಾಸಿಯಾದ ದರ್ಶನ್ ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿ ದಾರುಣ ಅಂತ್ಯ ಕಂಡ ಘಟನೆ  ಬೆಂಗಳೂರು ಉತ್ತರ ತಾಲೂಕು ಲಕ್ಷ್ಮೀಪುರ ಕೆರೆಯಲ್ಲಿ ನಡೆದಿದೆ.

ತಾಯಿಯ ತಂದೆಗೆ ಹುಷಾರಿಲ್ಲದ ಕಾರಣ ಮನೆಯವರೆಲ್ಲರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೆಸಾವೆಗೆ ಹೋಗಿರುವ ವೇಳೆ ಮನೆಯಲ್ಲಿ ಉಳಿದಿದ್ದ ಮಗ ದರ್ಶನ್  ಸ್ನೇಹಿತರೊಂದಿಗೆ ಈಜಲು ತೆರಳಿದ್ದಾನೆ. ಈ ವೇಳೆ ದರ್ಶನ್​ ಈಜು ಬಾರದೆ ನೀರಿನಾಳಕ್ಕೆ ಮುಳುಗಿ ಸಾವನ್ನಪ್ಪಿದ್ದಾನೆ. ಕೆರೆಯೊಳಗೆ ಸುಮಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆಯಲಾಗಿದೆ.

error: Content is protected !!

Join the Group

Join WhatsApp Group