ಮಂಗಳೂರು: ಕಟ್ಟಡ ದುರಸ್ತಿ ಕಾಮಗಾರಿ ಹಿನ್ನೆಲೆ ➤ ತಾತ್ಕಾಲಿಕವಾಗಿ ದಹನ ಕಾರ್ಯ ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17.  ಇಲ್ಲಿನ ಮಹಾನಗರ ಪಾಲಿಕೆಯ ಬೋಳೂರು ಸ್ಮಶಾನದಲ್ಲಿ ಕಟ್ಟಿಗೆ ಮೂಲಕ ಶವದಹನ ಮಾಡುವ ಕಟ್ಟಡದ ದುರಸ್ತಿ ಕಾಮಗಾರಿಯು ಮಾ.17 ರಿಂದ 30ರವರೆಗೆ ನಡೆಯಲಿರುವ ಕಾರಣ ಅಲ್ಲಿ ತಾತ್ಕಾಲಿಕವಾಗಿ ಶವದಹನ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ಅದೇ ಸ್ಮಶಾನದಲ್ಲಿ ಲಭ್ಯವಿರುವ ವಿದ್ಯುತ್ ಮೂಲಕ ಶವದಹನ ಸೇವೆಯನ್ನು ಬಳಸುವಂತೆ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top