ಸಾಮಾನ್ಯ ಮಹಿಳೆಯರಂತೆ ಕೂತು ಪೊಂಗಲ್ ತಯಾರಿಸಿದ ಸುಧಾಮೂರ್ತಿ  

(ನ್ಯೂಸ್ ಕಡಬ)newskadaba.com  ತಿರುವನಂತಪುರಂ,  ಮಾ.10. ತಿರುವನಂತಪುರಂನ ಅಟ್ಟುಕಲ್ ಭಗವತಿ ದೇವಸ್ಥಾನದ ಪ್ರಸಿದ್ಧ ಪೊಂಗಲ ಹಬ್ಬಕ್ಕೆ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ವಿಷೇಶ ವ್ಯಕ್ತಿಯೊಬ್ಬರು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.

ಖ್ಯಾತ ಶಿಕ್ಷಣತಜ್ಞೆ, ಲೇಖಕಿ, ಪರೋಪಕಾರಿ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಸಾವಿರಾರು ಮಹಿಳೆಯರ ನಡುವೆ ಕುಳಿತು ದೇವರಿಗೆ ಪೊಂಗಲ ಅಥವಾ ಪೊಂಗಲ್ (ಅಕ್ಕಿ, ತೆಂಗಿನಕಾಯಿ ಮತ್ತು ಬೆಲ್ಲ ಬಳಸಿ ಮಾಡಿದ ಸಿಹಿ ಖಾದ್ಯ) ಅರ್ಪಿಸಿದರು.

Also Read  ಶೀಘ್ರದಲ್ಲೇ ಜನಗಣತಿ ಕಾರ್ಯ ಆರಂಭ- ಕೇಂದ್ರ ಗೃಹ ಸಚಿವ ಅಮಿತ್ ಶಾ

 

error: Content is protected !!
Scroll to Top