ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಪತನ

(ನ್ಯೂಸ್ ಕಡಬ)newskadaba.com  ಮುಂಬೈ, ಮಾ.08. ಭಾರತೀಯ ನೌಕಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ ದ್ರುವ್ ಮುಂಬೈನ ಕರಾವಳಿ ತೀರದಲ್ಲಿ ಪತನವಾಗಿದೆ.

ಹೆಲಿಕಾಪ್ಟರ್ ನಲ್ಲಿದ್ದ ಮೂವರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ, ಘಟನೆಯ ತನಿಖೆಗೆ ಸಹ ಆದೇಶಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಘಟನೆ ನಡೆದ ಕೂಡಲೇ ತಕ್ಷಣ ಶೋಧ ಮತ್ತು ಪಾರುಗಾಣಿಕಾ ನೌಕಾ ಗಸ್ತು ನೌಕೆ ಮೂಲಕ ಕಾರ್ಯ ಆರಂಭಿಸಿ, ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ತನ್ನ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದೆ.

Also Read  ಕುಂದಾಪುರ: ರಾಜ್ಯದ ಪ್ರಥಮ ಗಂಗಾಕಲ್ಯಾಣ ಉದ್ಘಾಟಿಸಿದ ಸಚಿವ ಕೋಟಾ        

 

error: Content is protected !!
Scroll to Top