ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಪಸ್ವರವೇಕೆ ?    ➤ ಲೇಖನ; ದಿವಾಕರ್‌.ಡಿ.ಮಂಡ್ಯ               

(ನ್ಯೂಸ್ ಕಡಬ)newskadaba.com  ಕರ್ನಾಟಕದಲ್ಲಿ ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಸದಾಕಾಲ ಒಂದಿಲ್ಲೊಂದು ವಿವಾದವನ್ನು ತನ್ನ ಮೇಲೆ ಎಳೆದುಕೊಳ್ಳುತ್ತದೆಯೋ ಅಥವಾ ಆಡಳಿತ ನಡೆಸಿ ಅನುಭವವಿಲ್ಲದ ಅನನುಭವಿಗಳ ದಂಡು ತುಂಬಿರುವ ಇವರ ಆಡಳಿತದಲ್ಲಿ ವಿವಾದಗಳನ್ನು ಹುಟ್ಟುಹಾಕುತ್ತಿದ್ದರೋ ಎಂಬುದು ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರಿಗೆ ಅನುಮಾನ ಮೂಡುತ್ತಿದೆ.

ಏಕೆಂದರೆ ಕರ್ನಾಟಕ ರಾಜ್ಯದಲ್ಲಿ ಆಡಳಿತರೂಢ ಪಕ್ಷವಾಗಿ ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತಿರುವ ದಿನದಿಂದ ಇವರು ಮಾಡಿದ ಅವಾಂತರಗಳು ಒಂದೆರಡಲ್ಲ. ಶಾಲಾಪಠ್ಯಪುಸ್ತಕ, ಹಿಜಾಬ್ ನಿಷೇದ, ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪೋಷಕರಿಂದ ಪ್ರತಿ ತಿಂಗಳು ನೂರು ರೂಪಾಯಿಗಳ ವಂತಿಗೆಯ ಆದೇಶ ಹೀಗೆ ಹಲವು ವಿವಾದಗಳ ಜೊತೆಗೆ ಇಂದು ಅಂತರಾಷ್ಟ್ರೀಯ ಮಹಿಳಾ ದಿನದಲ್ಲೂ ಸಹ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡಿದ್ದಾರೆ.ಆ ವಿವಾದಕ್ಕೂ ಮೊದಲು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೋಟವನ್ನು ತಿಳಿಯಬೇಕಾದದ್ದು ಅತ್ಯಂತ ಅವಶ್ಯಕವಾಗಿದೆ.

Also Read  ಪ್ರೇಯಸಿ ಮೃತಪಟ್ಟ ಹಿನ್ನೆಲೆ ➤ ಆಕೆಯ ಸಮಾಧಿಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ...!

-ದಿವಾಕರ್‌.ಡಿ.ಮಂಡ್ಯ

 

 

error: Content is protected !!
Scroll to Top