ಕಡಬದ ಹಸ್ತಾ.ಪಿ.ಎ ಗೆ ಸುವರ್ಣ ಗರಿ ಪ್ರಶಸ್ತಿ !          

(ನ್ಯೂಸ್ ಕಡಬ)newskadaba.com ಕಡಬ, ಮಾ. 07. 2021-22 ನೇ ಸಾಲಿನ ಭಾರತ್ ಸ್ಕೌಟ್ಸ್ ಗೈಡ್ಸ್ ನ ಬುಲ್ ಬುಲ್ ವಿಭಾಗದಲ್ಲಿ ಕಡಬ ಸೈಂಟ್ ಜೋಕಿಮ್ಸ್ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಹಸ್ತಾ.ಪಿ.ಎ ಅವರಗೆ ಸುವರ್ಣ ಗರಿ ಪ್ರಶಸ್ತಿ ಲಭಿಸಿದೆ.

ಮಾ.05 ರಂದು ದ.ಕ ಜಿಲ್ಲಾಧಿಕಾರಿಯವರ ನಿವಾಸದಲ್ಲಿ 2021-22 ನೇ ಸಾಲಿನ ತೃತೀಯ ಚರಣ ಕಬ್, ಸುವರ್ಣ ಗರಿ ಬುಲ್ ಬುಲ್ , ತೃತೀಯ ಸೋಪಾನ ಸ್ಕೌಟ್ಸ್ ಮತ್ತು ಗೈಡ್ಸ್, ನಿಪುನ್ರೋವರ್ಸ್ ಮತ್ತು ರೇಂಜರ್ಸ್ ಪ್ರಶಸ್ತಿ ಪತ್ರ ಪ್ರಧಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ರವರು ಸುವರ್ಣ ಗರಿ ಪ್ರಶಸ್ತಿ ಪ್ರಧಾನ ಮಾಡಿದರು. ಸುವರ್ಣ ಗರಿ ಪ್ರಶಸ್ತಿ ಪಡೆದುಕೊಂಡ ಹಸ್ತಾರವರಿಗೆ ಪ್ಲಾಕ್ ಲಿಡರ್ ಪೂಂಜಾಲಕಟ್ಟೆ ಸಿಆರ್.ಪಿ ಚೇತನಾ ಅವರು ಮಾರ್ಗದರ್ಶನ ಮಾಡಿದ್ದಾರೆ. ಈಕೆ ಕಡಬ ಸಿಎ ಬ್ಯಾಂಕ್ ಸಿಬ್ಬಂದಿ ಆನಂದ ಗೌಡ ಕೊಂಕ್ಯಾಡಿ ಮತ್ತು ಪೂರ್ಣಿಮಾ ದಂಪತಿಯ ಪುತ್ರಿ.

 

error: Content is protected !!
Scroll to Top