ಪುತ್ತೂರು: ಬೈಕ್ ಢಿಕ್ಕಿ ➤ ಪಾದಚಾರಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 07. ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯೊಬ್ಬರು ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕೌಡಿಚ್ಚಾರಿನಲ್ಲಿ ಸೋಮವಾರದಂದು ತಡರಾತ್ರಿ ನಡೆದಿದೆ.

ಮೃತರನ್ನು ಮಾಡ್ನೂರು ಗ್ರಾಮದ ಕುಂಞಿಕುಮೇರು ನಿವಾಸಿ ನಾರಾಯಣ ನಾಯ್ಕ್ (49) ಎಂದು ಗುರುತಿಸಲಾಗಿದೆ. ಇವರು ಸಹೋದರ ಬಾಲಕೃಷ್ಣ ನಾಯ್ಕ್ ಎಂಬವರ ಜೊತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಳ್ಯ ಕಡೆಯಿಂದ ಬಂದ ಬೈಕ್ ನಾರಾಯಣ ನಾಯ್ಕ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾರಾಯಣ ನಾಯ್ಕ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಬೈಕ್ ಸವಾರ ಗುರುಪ್ರಸಾದ್ ಅವರಿಗೂ ಗಾಯವಾಗಿತ್ತು. ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರದೊಯ್ಯುವ ವೇಳೆ ನಾರಾಯಣ ನಾಯ್ಕ ಅವರು ಮೃತಪಟ್ಟಿದ್ದರು. ಘಟನೆಯ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಧಾರಾಕಾರ ಮಳೆಗೆ  ಕುಸಿದು ಬಿದ್ದ ಮನೆ..! ➤20 ದಿನದ ಹಸುಗೂಸು ಸೇರಿ ಇಬ್ಬರು ಮೃತ್ಯು

error: Content is protected !!
Scroll to Top