ಬಂಟ್ವಾಳ: ಆಕಸ್ಮಿಕ ಬೆಂಕಿ ಅನಾಹುತ ! ➤ ರೆಫ್ರಿಜರೇಟರ್ ದುರಸ್ಥಿ ಮಳಿಗೆ ಬೆಂಕಿಗಾಹುತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.06. ಪಾಣೆಮಂಗಳೂರಿನ ಗುಡ್ಡೆ ಅಂಗಡಿಯ ರೆಫ್ರಿಜರೇಟರ್ ದುರಸ್ತಿಯ ಮಳಿಗೆಯೊಂದರಲ್ಲಿ ರವಿವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.


ಗುಡ್ಡೆ ಅಂಗಡಿಯ ಫಾರೂಕ್ ಅವರಿಗೆ ಸೇರಿದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸೇರಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ ಎಂದು ವರದಿ ತಿಳಿಸಿದೆ.

Also Read   ಮಂಗಳೂರು: ಕರಾವಳಿಯಾದ್ಯಂತ ಇಂದು ಭಕ್ತಿ ಸಂಭ್ರಮದ ಶಿವರಾತ್ರಿ ಆಚರಣೆ

error: Content is protected !!
Scroll to Top