➤ ಕುಡಿದು ಪೀಡಿಸುತ್ತಿದ್ದ ಮಗನನ್ನು ಕೊಂದ ತಂದೆ

(ನ್ಯೂಸ್ ಕಡಬ) newskadaba.com. ಬೆಳಗಾವಿ, ಮಾ 3. ಕೂಲಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ, ಆ ದಂಪತಿಗೆ ಎರಡು ಗಂಡು ಮಕ್ಕಳು ಇದ್ದಾರೆ. ಒಬ್ಬ ಓದುತ್ತಿದ್ದರೆ, ದೊಡ್ಡ ಮಗ ಕುಡಿತದ ಚಟಕ್ಕೆ ದಾಸನಾಗಿ ಹಣಕ್ಕಾಗಿ ತಂದೆ ತಾಯಿಯನ್ನ ಪೀಡಿಸುತ್ತಿದ್ದ. ಈ ಕಿರುಕುಳ ತಾಳಲಾರದೇ ತಂದೆಯೇ ಮಗನನ್ನ ಕೊಲೆ ಮಾಡಿದ್ದಾನೆ.

ಬೆಳಗಾವಿ ದಿಕ್ಕು ತೋಚದ ಸ್ಥಿತಿಯಲ್ಲಿ ಕುಳಿತ ಈ ತಾಯಿಯ ಪರಿಸ್ಥಿತಿ ಯಾರಿಗೂ ಬಾರದಿರಲಿ. ಒಂದು ಕಡೆ ಗಂಡ ಜೈಲು ಸೇರಿದ್ದರೆ ಇನ್ನೊಂದು ಕಡೆ ಮಗ ಮಸಣ ಸೇರಿದ್ದಾನೆ. ಎನೂ ಮಾಡಲಿ ಅನ್ನೋದು ಕೂಡ ಗೊತ್ತಾಗದೇ ಮನದಲ್ಲಿ ಎಲ್ಲವನ್ನೂ ನುಂಗಿಕೊಂಡು ಕುಳಿತಿದ್ದಾರೆ. ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿ.ಕೆ ಗ್ರಾಮದ ನಿವಾಸಿ. ಅರವತ್ತರ ವಯಸ್ಸಿನಲ್ಲೂ ದುಡಿದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಕುಟುಂಬ ಇದೀಗ ಬೀದಿಗೆ ಬಂದಿದೆ. ಅಷ್ಟಕ್ಕೂ ಈ ಶೋಭಾರ ಗಂಡ ಜೀನ್ನಪ್ಪ ಕಾಂಜಿ ಮಗನನ್ನೇ ಕೊಲೆ ಮಾಡಿ ಜೈಲು ಸೇರಿದ್ದಾನೆ.

error: Content is protected !!

Join the Group

Join WhatsApp Group