ಚಿಕ್ಕಮಗಳೂರು ಸಹೋದ್ಯೋಗಿಗಳ ವಿರುದ್ಧ ವಂಚನೆ ಆರೋಪ ➤ಕಾನ್ಸ್‌ಟೇಬಲ್ ಅಮಾನತು

(ನ್ಯೂಸ್ ಕಡಬ) newskadaba.com. ಚಿಕ್ಕಮಂಗಳೂರು. ಮಾ.01.  ಸಹೋದ್ಯೋಗಿಗಳ ವಿರುದ್ಧ ಪಿತೂರಿ ಆರೋಪ ಕಾನ್ಸ್‌ಟೇಬಲ್ ಮಂಜುನಾಥ್​ನನ್ನ ಅಮಾನತು ಮಾಡಿದ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್. ಕಳ್ಳತನದ ಆರೋಪದ ಹಿನ್ನೆಲೆ‌‌ ಆಟೋ‌ ಚಾಲಕನೊಬ್ಬನ ಮೇಲೆ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಹಿತ್ ಹಾಗೂ ವಸಂತ್ ಎಂಬುವವರು ಹಲ್ಲೆ ಮಾಡಿದ್ದರು.

ಈ ಕುರಿತು ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಇಬ್ಬರು ಪೇದೆಗಳನ್ನ ಅಮಾನತು ಮಾಡಿದ್ದರು. ಇದೀಗ ಅಮಾನತು‌ ಆಗಿದ್ದ ಇಬ್ಬರು ಕಾನ್ಸ್‌ಟೇಬಲ್ ವಿರುದ್ಧ ದೂರು ನೀಡಿ, ಹಣ ಪಡೆಯುವಂತೆ ಸಾರ್ವಜನಿಕರ ಮೇಲೆ‌ ಒತ್ತಡ ಹಾಕಿದ್ದ ಕಾನ್ಸ್‌ಟೇಬಲ್ ಮಂಜುನಾಥ್​ನನ್ನ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

 

error: Content is protected !!
Scroll to Top