➤ ಪ್ರೇಯಸಿಗಾಗಿ ತನ್ನ ಗೆಳೆಯನನ್ನೆ ಕ್ರೂರವಾಗಿ ಕೊಂದ ಆಸಾಮಿ

(ನ್ಯೂಸ್ ಕಡಬ) newskadaba.com. ಹೈದರಾಬಾದ್. ಫೆ.27.  ತನ್ನ ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕಾಗಿ ಮತ್ತು ಕರೆ ಮಾಡಿದ ಎಂಬ ಕಾರಣಕ್ಕಾಗಿ  ತನ್ನ ಸ್ನೇಹಿತನನ್ನು ಕ್ರೂರವಾಗಿ ಕೊಂದ ಘಟನೆ  ಹೈದರಾಬಾದ್ ನಲ್ಲಿ ನಡೆದಿದೆ. ಇಲ್ಲಿ ನವೀನ್ (22) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹರಿಹರ ಕೃಷ್ಣಾ ಎಂಬಾತ ಕೃತ್ಯವನ್ನು ನಡೆಸಿದ್ದಾನೆ ಎನ್ನಲಾಗಿದೆ.

 

ನವೀನ್ ನನ್ನು ಕೊಲೆ ಮಾಡಿ, ಆತನ ತಲೆ ಕಡಿದು,ಆತನ ಹೃದಯ ಮತ್ತು ಖಾಸಗಿ ಭಾಗಗಳನ್ನು ತೆಗೆದು, ಬೆರಳುಗಳನ್ನು ಕತ್ತರಿಸಿ, ನಂತರ ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆಂದು ಹೇಳಾಗಿದೆ. ಆರೋಪಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!

Join the Group

Join WhatsApp Group