ಮದ್ಯ ಸೇವಿಸಿ ಬಂದು ತಂದೆ-ಮಗನ ನಡುವೆ ಗಲಾಟೆ ➤ ಮಗನ ಕೊಲೆಯಲ್ಲಿ ಅಂತ್ಯ

Crime

(ನ್ಯೂಸ್ ಕಡಬ) newskadaba.com ಹೆಬ್ರಿ, ಫೆ. 26. ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮಗನ ಕಿರುಕುಳ ತಾಳಲಾರದೇ ಸ್ವತಃ ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ವರಂಗ ಗ್ರಾಮದ ಮೂಡುಬೆಟ್ಟುವಿನಲ್ಲಿ ನಡೆದಿದೆ.


ಕೊಲೆಯಾದವರನ್ನು ಸತೀಶ್‌ ಪೂಜಾರಿ(40) ಎಂದು ಗುರುತಿಸಲಾಗಿದೆ. ಆರೋಪಿ ತಂದೆಯನ್ನು ಕುಟ್ಟಿ ಪೂಜಾರಿ ಎಂದು ಗುರುತಿಸಲಾಗಿದೆ. ಪ್ರತಿದಿನ ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ ಈತ, ಫೆ. 24ರಂದು ತಂದೆ ಕುಟ್ಟಿ ಪೂಜಾರಿ ಮನೆಯಲ್ಲಿ ಮಲಗಿದ್ದ ವೇಳೆ, ವಿಪರೀತ ಮದ್ಯ ಸೇವಿಸಿ ಬಂದ ಸತೀಶ್ ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದು ಬಳಿಕ ತಂದೆಯನ್ನು ಅಂಗಳಕ್ಕೆ ಎಳೆದು ತಂದಿದ್ದು, ಇದರಿಂದ ಕೋಪಗೊಂಡ ಕುಟ್ಟಿ ಪೂಜಾರಿ ಅಡುಗೆ ಕೋಣೆಯಲ್ಲಿದ್ದ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿ ಅವರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಸತೀಶ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಉಡುಪಿ: ಚಲಿಸುತ್ತಿದ್ದ ಕಂಟೇನರ್ ಲಾರಿ ತಾಗಿ ರಸ್ತೆಗೆ ಬಿದ್ದ ಮರದ ಗೆಲ್ಲು ➤ ಕೆಲಕಾಲ ಸಂಚಾರ ಅಸ್ತವ್ಯಸ್ತ

error: Content is protected !!
Scroll to Top