ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ ಪ್ರಕರಣ ➤ಬೆಂದು ಹೋಗಿದ್ದ ಪ್ರಾಂಶುಪಾಲೆ ಮೃತ್ಯು..!

(ನ್ಯೂಸ್ ಕಡಬ) newskadaba.com. ಇಂದೋರ್. ಫೆ.25.  ಹಿರಿಯ ವಿದ್ಯಾರ್ಥಿ ಹಚ್ಚಿದ್ದ ಬೆಂಕಿಯಿಂದ ಬೆಂದು ಹೋಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಇಂದೋರ್‌ನ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ ಇಂದು ಮೃತಪಟ್ಟಿದ್ದಾರೆ.

ಇಂದೋರ್​ನ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮು+ಕ್ತಾ ಶರ್ಮಾ (54) ಅವರಿಗೆ ಅದೇ ಕಾಲೇಜಿನ ಮಾಜಿ ವಿದ್ಯಾರ್ಥಿ ಆಶುತೋಶ್​ ಶ್ರೀವಾತ್ಸವ್​ (24) ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಕಿ ಹಚ್ಚಿದ್ದ. ಶೇ.70ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಪ್ರಾಂಶುಪಾಲೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಇಂದು ಮುಂಜಾನೆ ಅಸು ನೀಗಿದರು. ಪ್ರಾಂಶುಪಾಲೆ ವಿಮುಕ್ತಾ ಶರ್ಮಾ ಸೋಮವಾರ ಕಾಲೇಜು ಮುಗಿಸಿ ಮನೆಗೆ ತೆರಳಲು ಅಣಿಯಾಗುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನೋವಿನಿಂದ ಚೀರುತ್ತಾ ಪ್ರಾಂಶುಪಾಲೆ ಕಾಲೇಜಿನ ಕಟ್ಟಡದೊಳಗೆ ಓಡಿದ್ದಾರೆ. ಕೂಡಲೇ ಅಲ್ಲಿದ್ದ ಸಹದ್ಯೋಗಿಗಳು ಬೆಂಕಿ ನಂದಿಸಿದ್ದಾರೆ. ಬೆಂಕಿ ಹಚ್ಚಿದ್ದ ಅಶುತೋಶ್ ಕೂಡಾ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ವಾಚ್‌ಮೇನ್ ತಡೆದದ್ದರಿಂದ ಆತನ ಪ್ರಯತ್ನ ವಿಫಲವಾಗಿತ್ತು.

error: Content is protected !!

Join the Group

Join WhatsApp Group