ಆಸ್ತಿ ಇಲ್ಲದವರಿಗೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡ್   ➤  ಪಡಿತರ ಅಂಗಡಿಯಲ್ಲಿ SC, ST ಗೆ ಶೇಕಡ 24.1 ರಷ್ಟು ಮೀಸಲಾತಿ ನೀಡಲು ಶಿಫಾರಸು..!

(ನ್ಯೂಸ್ ಕಡಬ)newskadaba.com  ಬೆಂಗಳೂರು, ಫೆ.24. ನ್ಯಾಯ ಬೆಲೆ ಅಂಗಡಿಗಳ ಮಂಜೂರಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 24.1 ರಷ್ಟು ಮೀಸಲಾತಿ ಕಲ್ಪಿಸಲು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ. ಸಮಿತಿಯು ತನ್ನ 7ನೇ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡ 24.1 ರಷ್ಟು ಮೀಸಲಾತಿ ನೀಡಬೇಕು. ಕುಟುಂಬದಲ್ಲಿ ಯಾರೂ ಇಲ್ಲದೆ ಒಬ್ಬರೇ ಇರುವವರಿಗೆ ಮತ್ತು ಯಾವುದೇ ಆಸ್ತಿ ಇಲ್ಲದವರಿಗೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡ್ ವಿತರಿಸಲು ನಿಯಮ ರೂಪಿಸಬೇಕೆಂದು ಸಮಿತಿ ಅಭಿಪ್ರಾಯ ತಿಳಿಸಿದೆ.

 

Also Read  ನಿರುದ್ಯೋಗ- ಯುವಕನಿಂದ ಆತ್ಮಹತ್ಯೆಗೆ ಯತ್ನ - ಸ್ಥಳೀಯರಿಂದ ರಕ್ಷಣೆ

 

error: Content is protected !!
Scroll to Top