‘ಆಕ್ಸಿಜನ್ ದುರಂತ; ಡಿಕೆಶಿ ಆರೋಪಕ್ಕೆ ಸದನದಲ್ಲಿ ಉತ್ತರಿಸಿದ್ದೇನೆ’     ➤  ಸಚಿವ ಕೆ. ಸುಧಾಕರ್

(ನ್ಯೂಸ್ ಕಡಬ)newskadaba.com  ಚಾಮರಾಜನಗರ, ಫೆ.22. ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಮಾಡಿದ ಆರೋಪಗಳಿಗೆ ಈಗಾಗಲೇ ಸದನದಲ್ಲಿ ಉತ್ತರಿಸಿದ್ದೇನೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಏನೇನು ಮಾತನಾಡುತ್ತಾರೆಯೋ ಮಾತನಾಡಲಿ. ಕೋವಿಡ್ ಫೈಲ್ಸ್ ಎಂಬುದಾಗಿ ಅವರು ಸಿನಿಮಾ ಮಾಡುತ್ತಾರಂತೆ. ಮಾಡಲಿ ನೋಡೋಣ. ಕೊರೊನಾ ಸಮಯದಲ್ಲಿ ಇಂತಹವರೆಲ್ಲಾ ಇರಬಾರದೆಂದು ದೇವರಿಗೂ ಗೊತ್ತಿತ್ತು. ಅದಕ್ಕಾಗಿಯೇ ಅವರನ್ನು ದೇವರು ಅಧಿಕಾರದಿಂದ ದೂರ ಇಟ್ಟಿದ್ದರು ಎಂದು ಟಾಂಗ್ ನೀಡಿದರು.

 

error: Content is protected !!
Scroll to Top