➤ವರದಕ್ಷಿಣೆ ಕೊಟ್ಟಿಲ್ಲ ಎಂದು ಮದುವೆ ನಿರಾಕರಿಸಿದ ಯುವಕ

(ನ್ಯೂಸ್ ಕಡಬ) newskadaba.com. ಹೈದರಾಬಾದ್.  ಫೆ.21.  ವಧುವಿನ ಮನೆಯವರು ವರದಕ್ಷಿಣೆಯಾಗಿ ಹಳೆಯ ಫರ್ನೀಚರ್ ಕೊಟ್ಟಿದ್ದಾರೆ ಎಂದು ಮದುಮಗ ತನ್ನ ಮದುವೆಯನ್ನೇ ಮುರಿದುಕೊಂಡ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಬಸ್ ಚಾಲಕನಾಗಿರುವ ವರ, ನಡೆಯಬೇಕಿದ್ದ ಮದುವೆಗೆ ಹಾಜರಾಗಿಲ್ಲ. ವರದಕ್ಷಿಣೆಯಾಗಿ ವಧುವಿನ ಕುಟುಂಬ ನೀಡಿದ್ದ ಪೀಠೋಪಕರಣವು ತುಂಬಾ ಹಳೆಯದು ಎಂದು ಕಾರಣ ನೀಡಿ, ಮದುವೆ ದಿನವೇ ಕೈಕೊಟ್ಟಿದ್ದಾನೆ. ಇದರ ಬಳಿಕ ಮದುಮಗಳ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ತಾವು ಕೇಳಿದ್ದ ವಸ್ತುಗಳನ್ನು ನಾವು ಅವರಿಗೆ ನೀಡಿಲ್ಲ ಎಂದು ಅವರು ಆರೋಪಿಸಿದರು. ಅಲ್ಲದೆ, ಕೊಟ್ಟಿರುವ ಫರ್ನೀಚರ್ ಹಳೆಯದು ಎಂದು ತಗಾದೆ ತೆಗೆದರು. ಅವರು ಮದುವೆಗೆ ಬರಲು ನಿರಾಕರಿಸಿದರು. ನಾನು ಮದುವೆ ಮನೆಯಲ್ಲಿ ಒಳ್ಳೆಯ ಭೋಜನ ಸಿದ್ಧಪಡಿಸಿದ್ದೆ. ಎಲ್ಲ ಬಂಧುಗಳು ಮತ್ತು ಅತಿಥಿಗಳನ್ನು ಆಹ್ವಾನಿಸಿದ್ದೆ. ಆದರೆ ಮದುಮಗ ಮದುವೆಗೆ ಬರಲೇ ಇಲ್ಲ” ಎಂದು ವಧುವಿನ  ತಂದೆ ಬೇಸರ ವ್ಯಕ್ತಪಡಿಸಿದರು.

error: Content is protected !!
Scroll to Top