ಅಪಾರ ಸಾಲ ಮಾಡಿಕೊಂಡಿದ್ದ ಯುವ ರೈತ ಆತ್ಮಹತ್ಯೆಗೆ ಶರಣು..!        

(ನ್ಯೂಸ್ ಕಡಬ)newskadaba.com ಹುಣಸೂರು, ಫೆ.18. ಅಪಾರ ಸಾಲ ಮಾಡಿಕೊಂಡಿದ್ದ ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬನ್ನಿಕುಪ್ಪೆಯಲ್ಲಿ ನಡೆದಿದೆ. ತಾಲೂಕಿನ ಬನ್ನಿಕುಪ್ಪೆ ನಿವಾಸಿ ಸಣ್ಣಮೊಗಯ್ಯರ ಪುತ್ರ ಚೇತನ್ (30) ಆತ್ಮಹತ್ಯೆ ಮಾಡಿಕೊಂಡ ಯುವ ರೈತ ಎಂದು ಗುರುತಿಸಲಾಗಿದೆ.

ಇವರಿಗೆ ತಂದೆ-ತಾಯಿ, ಸಹೋದರ ಇದ್ದಾರೆ. ಚೇತನ್ ತಮ್ಮ ಜಮೀನಿನಲ್ಲಿ ತಂಬಾಕು ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಕೃಷಿಗಾಗಿ ಎಚ್.ಡಿ.ಎಫ್‌.ಸಿ., ಆಕ್ಸಿಸ್, ಇಕ್ವಿಟಾಸ್ ಬ್ಯಾಂಕ್ ಗಳಲ್ಲಿ 7 ಲಕ್ಷ ಹಾಗೂ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದರು.

Also Read  ಮೂರು ವಾಹನಗಳ ನಡುವೆ ಸರಣಿ ಅಪಘಾತ; ಬೈಕ್ ನಿಂದ ಹಾರಿ ಪಾರಾದ ಸವಾರ..!

 

error: Content is protected !!
Scroll to Top