ಎಡಮಂಗಲ: ವಸತಿ ಮಂಜೂರಾತಿಯಲ್ಲಿ ಅಕ್ರಮ – ವಿಎ, ಪಿಡಿಓ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.16. ಸುಳ್ಯ ತಾಲೂಕು ಎಡಮಂಗಲ ಗ್ರಾಮದ 2015-16 ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಲ್ಲಿ  ಎಡಮಂಗಲ ಗ್ರಾಮದ ಶಿವಮ್ಮ ಎಂಬವರಿಗೆ ಮನೆ ಮಂಜೂರು ಮಾಡಿದ್ದು, ಶಿವಮ್ಮರ ವಾರ್ಷಿಕ ಆದಾಯ ರೂ 1,93,296/- ಇದ್ದರೂ ಕೂಡಾ ಎಡಮಂಗಲ ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ರೂ.31,000/- ಆದಾಯ ಇರುವುದಾಗಿ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿರುತ್ತಾರೆ.
ಇದೇ ಪ್ರಕರಣದಲ್ಲಿ ಈ ಹಿಂದೆ ಎಡಮಂಗಲ ಪಿಡಿಓ ಚೆನ್ನಪ್ಪ ಗೌಡ ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರುಗೊಳಿಸಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ರಾಜೇಶ್ ರೈ ಎಂಬವರು ಎಸಿಬಿಗೆ ದೂರು ಸಲ್ಲಿಸಿರುತ್ತಾರೆ. ಈ ದೂರಿನ ಮೇರೆಗೆ ಜೂನ್ 15 ರಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಡಿವೈಎಸ್‍ಪಿ ಸುಧೀರ್ ಎಂ. ಹೆಗ್ಡೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
error: Content is protected !!
Scroll to Top