ಮಾನವ ದೋಷವೇ ಪೋಖರಾ ವಿಮಾನ ದುರಂತಕ್ಕೆ ಕಾರಣ!

(ನ್ಯೂಸ್ ಕಡಬ) newskadaba.com ಕಠ್ಮಂಡು, ಫೆ.17. ಕಳೆದ ತಿಂಗಳು ನೇಪಾಳದಲ್ಲಿ ನಡೆದ ಯೇತಿ ಏರ್‌ ಲೈನ್ಸ್ ವಿಮಾನ ಪತನಕ್ಕೆ ಮಾನವ ದೋಷವೇ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಜನವರಿ 15 ರಂದು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ ಯೇತಿ ಏರ್‌ಲೈನ್ಸ್ ಫ್ಲೈಟ್ 691, ರೆಸಾರ್ಟ್ ಸಿಟಿ ಪೊಖರಾದಲ್ಲಿನ ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ಕಮರಿಯಲ್ಲಿ ಅಪಘಾತಕ್ಕೀಡಾಯಿತು. ವಿಮಾನ ಪತನಗೊಂಡಾಗ ಅದರಲ್ಲಿ ನಾಲ್ಕು ಸಿಬ್ಬಂದಿ ಸೇರಿದಂತೆ 72 ಜನರಿದ್ದರು, ಆದರೆ ರಕ್ಷಣಾ ಅಧಿಕಾರಿಗಳು ಇದುವರೆಗೆ 71 ಶವಗಳನ್ನು ಮಾತ್ರ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕಾಣೆಯಾದ ಇತರ ಪ್ರಯಾಣಿಕರು ಮೃತಪಟ್ಟಿದ್ದಾರೆ  ಎಂದು ವರದಿ ತಿಳಿಸಿದೆ.

Also Read  ಮಂಗಳೂರಿನ ಯುವ ವೈದ್ಯೆಗೆ ಅಮೆರಿಕನ್ ಸ್ಕಾಲರ್ ಶಿಪ್ ಪ್ರಶಸ್ತಿ

 

 

error: Content is protected !!
Scroll to Top