ಡಿಎಂಕೆಗೆ ಸೇನೆಯ ಮೇಲೆ ಎಂದಿಗೂ ಗೌರವವಿಲ್ಲ   ➤ಅಣ್ಣಾಮಲೈ ಕೆಂಡಾಮಂಡಲ

(ನ್ಯೂಸ್ ಕಡಬ) newskadaba.com ಚೆನ್ನೈ, ಫೆ.16. ಡಿಎಂಕೆ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ್ದು, 1965-67ರಲ್ಲಿ ಪಕ್ಷ ರಚನೆಯಾಗಿದ್ದೇ ಹಾಗೆ. ಅವರಿಗೆ ಸೇನೆಯ ಮೇಲೆ ಎಂದಿಗೂ ಗೌರವ ಇಲ್ಲ ಎಂದು ಕೃಷ್ಣಗಿರಿಯಲ್ಲಿ ಸೇನಾ ಸಿಬಂದಿಯ ಹತ್ಯೆಯ ಕುರಿತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರವನ್ನು ಧರಿಸಿದ ಯಾವುದೇ ವ್ಯಕ್ತಿಗೆ ಗೌರವ ಸಿಗುವುದಿಲ್ಲ ಎಂಬುದು ಅವರ ಸಿದ್ದಾಂತ ಮತ್ತು ಸಂಸ್ಕೃತಿಯಲ್ಲಿದೆ. ಡಿಎಂಕೆ ಲಜ್ಜೆಗೆಟ್ಟ, ದುಷ್ಟ ಪಕ್ಷ ಎಂದು ಕಿಡಿ ಕಾರಿದರು ಎಂದು ವರದಿಯಾಗಿದೆ.

 

 

error: Content is protected !!

Join the Group

Join WhatsApp Group