ಜನಸೇವೆ ಮಾಡಲು ರಾಜಕೀಯ ಆಯ್ದುಕೊಂಡ ಜಡ್ಜ್!!

(ನ್ಯೂಸ್ ಕಡಬ) newskadaba.com ಗದಗ, ಫೆ.16. ನ್ಯಾಯಾಧೀಶ ಹುದ್ದೆಗೆ ಗುಡ್​ಬೈ, ರಾಜಕೀಯಕ್ಕೆ ಜೈ. ಜಡ್ಜ್​​ ಜನಸೇವೆ ಮಾಡಲು ರಾಜಕೀಯ ಆಯ್ದುಕೊಂಡಿದ್ದಾರೆ. ಸಿವಿಲ್‌ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ ಗದಗದ JMFC ಪ್ರಧಾನ ಸಿವಿಲ್ ನ್ಯಾಯಾಧೀಶ ಸುಭಾಷ್ ಚಂದ್ರ ರಾಥೋಡ್​ ಜೆಡಿಎಸ್ ಸೇರಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದು,  ಸುಭಾಷ್ ಚಂದ್ರ ರಾಥೋಡ್​ ಜೆಡಿಎಸ್​ನಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂದು ವರಿಯಾಗಿದೆ.

ರಾಥೋಡ್​ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದವರಾಗಿದ್ದಾರೆ.  ಕಾರ್ಮಿಕರ ಕಾನೂನು ವಿಷಯದಲ್ಲಿ ಪಿಎಚ್‌ಡಿ‌ ಪಡೆದಿರುವ ರಾಥೋಡ್ ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಜನ ಸೇವೆ ಮಾಡಲು ತಯಾರಿ ನಡೆಸಿದ್ದಾರೆ.

Also Read  ಶ್ರೀ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಯನ್ನು ನೆನೆಯುತ್ತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

 

error: Content is protected !!
Scroll to Top