➤ಇಬ್ಬರು ಸರಗಳ್ಳರ ಬಂಧನ ➤ ರೂ.6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.14.: ಇಬ್ಬರು ಸರಗಳ್ಳರನ್ನು ಕೆಂಗೇರಿ ಪೊಲೀಸರು ಮೈಸೂರಿನಲ್ಲಿ  ಬಂಧನಕ್ಕೊಳಪಡಿಸಿದ್ದು, ರೂ.6 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಕಬ್ಬಾಳು ಅಲಿಯಾಸ್ ಚಂದು (27) ಮತ್ತು ರಘು ಅಲಿಯಾಸ್ ಕುಳ್ಳ (37) ಎಂದು ತಿಳಿದು ಬಂದಿದೆ. ಬಂಧಿತರಿಂದ 5 ಚಿನ್ನದ ಸರ ಹಾಗೂ ದ್ವಿಚಕ್ರ ವಾಹನವನ್ನು  ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಚಾಮರಾಜನಗರ, ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಪೊಲೀಸರಿಗೆ ವಾಂಟೆಡ್ ಕ್ರಿಮಿನಲ್ ಗಳಾಗಿದ್ದರು. ಫೆಬ್ರವರಿ 7 ರಂದು ಕೆಂಗೇರಿ ಸ್ಯಾಟಲೈಟ್ ಟೌನ್‌ನ ಬಂಡೆ ಮಠದಲ್ಲಿ 71 ವರ್ಷದ ವೈದ್ಯನನ್ನು ದರೋಡೆ ಮಾಡಿದ್ದರು ತಿಳಿದು ಬಂದಿದೆ.

error: Content is protected !!

Join the Group

Join WhatsApp Group