‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು’ !  ➤ ಯಡಿಯೂರಪ್ಪ ಘೋಷಣೆ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಫೆ.12. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಈ ಕುರಿತು ಮಾತನಾಡಿದ ಯಡಿಯೂರಪ್ಪ, ಜ್ಞಾನಪೀಠ ಪಡೆದ ಮೊದಲ ಕನ್ನಡಿಗ ಕುವೆಂಪು ಆಗಿದ್ದು, ಅವರು ವಿಶ್ವ ಮಾನವ ಸಂದೇಶವನ್ನ ಸಾರಿದ್ದಾರೆ. ಹಾಗಾಗಿ ಕುವೆಂಪು ಹೆಸರಿಸಲು ನಿರ್ಣಯ ಮಾಡಿದ್ದು, ಸದನದಲ್ಲಿ ನಾನೇ ಮಂಡಿಸುತ್ತೇನೆ. ಅಧಿವೇಶನದಲ್ಲಿ ತೀರ್ಮಾನವನ್ನ ಸರ್ವಾನುಮತದಿಂದ ನಿರ್ಣಯಿಸಿ ಕೇಂದ್ರಕ್ಕ ಕಳುಹಿಸಲಾಗುತ್ತದೆ. ಬಿಎಸ್ ವೈ ಹೆಸರು ಮೊದಲೇ ಬೇಡ ಎಂದಿದ್ದೆ. ಹಾಗಾಗಿ ಕುವೆಂಪು ಹೆಸರು ಇಡಲು ನಿಶ್ಚಿಯಿಸಿರುವೆ ಎಂದರು.

Also Read  ರಾಜ್ಯದಲ್ಲಿಂದು 48 ಸಾವಿರದ ಗಡಿ ದಾಟಿ ಕೊರೋನಾ ಸೋಂಕು➤ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1205 ಮಂದಿಗೆ ಸೋಂಕು ದೃಢ

 

error: Content is protected !!
Scroll to Top