ಚಿಕ್ಕಮಗಳೂರು ಬೆಂಕಿ ಅವಘಡ ➤ 25  ಎಕರೆ ಕುರುಚಲು ಕಾಡು ನಾಶ

(ನ್ಯೂಸ್ ಕಡಬ) newskadaba.com  ಚಿಕ್ಕಮಗಳೂರು, ಫೆ.10.  ನಗರ ಸಮೀಪದ  ಚುರ್ಚೆಗುಡ್ಡ ಅರಣ್ಯ   ಪ್ರದೇಶದಲ್ಲಿ  ನಿನ್ನೆ ರಾತ್ರಿ  ಬೆಂಕಿ  ಕಾಣಿಸಿಕೊಂಡಿದ್ದು,  ಬೆಂಕಿಯ  ಕೆನ್ನಾಲಿಗೆಗೆ  ಸುಮಾರು  25  ಎಕರೆ  ಪ್ರದೇಶದಲ್ಲಿದ್ದ  ಕುರುಚಲು  ಕಾಡು  ಸುಟ್ಟು  ಭಸ್ಮವಾಗಿದೆ. ಈ  ನಡುವೆ  ಬೆಂಕಿಯ  ಹಿಂದೆ  ಕಿಡಿಗೇಡಿಗಳ   ಕೃತದ  ಶಂಕೆ  ವ್ಯಕ್ತವಾಗಿದೆ.

ನಗರದ  ಹೊರವಲಯದಲ್ಲಿರುವ  ಪವಿತ್ರವನ  ಸಮೀಪದ  ಚುರ್ಚೆಗುಡ್ಡೆ  ಅರಣ್ಯ  ಪ್ರದೇಶದಲ್ಲಿ  ಈ  ಬೆಂಕಿ  ಕಾಣಿಸಿಕೊಂಡಿದೆ.  ಬೆಂಕಿ  ನಂದಿಸಲು  ಅರಣ್ಯ  ಇಲಾಖೆಯ  ಸಿಬ್ಬಂದಿ  ಕಳೆದ  ರಾತ್ರಿ  ಹರಸಾಹಸ  ಪಟ್ಟಿದ್ದು  ಬೆಂಕಿಯನ್ನು  ಸದ್ಯ ನಿಯಂತ್ರಿಸಲಾಗಿದೆ ಎಂದು  ವರದಿಯಾಗಿದೆ. ಯಾವುದೇ  ವನ್ಯಜೀವಿಗಳು  ಬೆಂಕಿಗೆ  ಸಿಲುಕಿ  ಮೃತಪಟ್ಟಿಲ್ಲ  ಎಂದು  ಅರಣ್ಯ ಇಲಾಖೆ  ಅಧಿಕಾರಿಗಳು ತಿಳಿಸಿದ್ದಾರೆ.

 

 

 

 

error: Content is protected !!

Join WhatsApp Group

WhatsApp Share