ಕಡಬ: ಯುವಕ ನಾಪತ್ತೆ – ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.16. ಕಡಬ ಸಮೀಪದ ಪೆಲತ್ರಾಣೆ ನಿವಾಸಿ ಅಬ್ಬಾಸ್ ಅವರ ಪುತ್ರ ಆದಂ(23) ಗುರುವಾರ ಮಧ್ಯಾಹ್ನ ತನ್ನ ಸ್ನೇಹಿತ ಮರ್ದಾಳ ನಿವಾಸಿ ಸಂತೋಷ್ ಎಂಬವನೊಂದಿಗೆ ತನ್ನ ಕಾರಿನಲ್ಲಿ ಹೋಗಿದ್ದು ಮುರಳಿ ಬಾರದೇ ನಾಪತ್ತೆಯಾಗಿದ್ದಾನೆ.

ಗುರುವಾರ ರಾತ್ರಿ 12 ಗಂಟೆಯಾದರೂ ಆದಂ ಮನೆಗೆ ಬಾರದ ಕಾರಣ ಮನೆಯವರು ಸಂತೋಷನಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆ ಸಮಯ “ಆದಂ ಪೆರಿಯಶಾಂತಿಯಲ್ಲಿ ಕಾರಿನಿಂದ ಇಳಿದಿರುವುದಾಗಿ” ಹೇಳಿದ್ದು ಆದಂ ನ ಕಾರನ್ನು ಮನೆಗೆ ತಂದು ಕೊಟ್ಟಿದ್ದಾನೆ. ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಪೆರಿಯಶಾಂತಿಯಲ್ಲಿ ಕಾರಿನಿಂದ ಇಳಿದ ಆದಂ ನಾಪತ್ತೆಯಾಗಿದ್ದು ಈ ಬಗ್ಗೆ ಆದಂ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!
Scroll to Top