ಪುತ್ತೂರು ಲಂಚ ಸ್ವೀಕರಿಸುತ್ತಿದ್ದ ವೈದ್ಯಾಧಿಕಾರಿ ಎಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.22. ಸರಕಾರಿ ವೈದ್ಯರೋರ್ವರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದ ಘಟನೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.

ಸಂತೋಷ್ ಆಚಾರ್ಯ ಎಂಬವರು ಚಾಟ್ ಸೆಂಟರ್ ಪಡೆಯುವ ಉದ್ದೇಶದಿಂದ ತಾಲೂಕು ವೈದ್ಯಾಧಿಕಾರಿ ಕಚೇರಿಗೆ ಪರವಾನಿಗೆ ಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ವೈದ್ಯಾಧಿಕಾರಿ ಸುಮಂತ್ ಎಂಬವರು ಲಂಚ ಕೇಳಿದ್ದರು. ಸಂತೋಷ್ ಸುವರ್ಣರ ದೂರಿನಂತೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು 2500 ರೂ. ಲಂಚ ಸ್ವೀಕರಿಸುತ್ತಿದ್ದ ವೈದ್ಯಾಧಿಕಾರಿ ಸುಮಂತ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Also Read  ಹಿಂದಿನ ರೇಡಿಯೋ ಪೆವಿಲಿಯನ್ ಇಂದಿನ ಅಂಚೆ ಕಛೇರಿ ► ಹೊಸಮಠದ ಪಿರಮಿಡ್ ಆಕಾರದ ಆರು ಕೋನಗಳ ಕಟ್ಟಡದ ಸುತ್ತ ಒಂದು ನೋಟ

ಎಸಿಬಿ ಎಸ್.ಪಿ ಶ್ರುತಿ.ಎನ್.ಎಸ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುಧೀರ್.ಎಂ.ಹೆಗ್ಡೆ ಅವರ ನೇತೃತ್ವದಲ್ಲಿ ಎಸಿಬಿ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

error: Content is protected !!
Scroll to Top