ಕೇರಳದಿಂದ ಕೊಡಗಿಗೆ ರಾತ್ರೋರಾತ್ರಿ ಕಸ ತಂದು ಸುರಿದ ಆರೋಪ ➤ ಇಬ್ಬರು ಅರೆಸ್ಟ್‌…

(ನ್ಯೂಸ್ ಕಡಬ)newskadaba.com ಕೊಡಗು, ಫೆ.01. ಆಂಧ್ರಪ್ರದೇಶದಿಂದ ಸರಕುಗಳನ್ನು ಕೇರಳಕ್ಕೆ ಸಾಗಿಸಿ, ವಾಪಸ್ ಬರುತ್ತಿದ್ದ ಖಾಲಿ ಲಾರಿಗಳಲ್ಲಿ ಕಸವನ್ನು ತಂದು ಮಡಿಕೇರಿಯಲ್ಲಿ ಸುರಿಯುತ್ತಿದ್ದ ಇಬ್ಬರನ್ನು ಅರೆಸ್ಟ್‌ ಮಾಡಲಾಗಿದೆ.

ಆಂಧ್ರಪ್ರದೇಶದಿಂದ ಸರಕುಗಳನ್ನು ಕೇರಳಕ್ಕೆ ಸಾಗಿಸಿ, ವಾಪಸ್ ಬರುತ್ತಿದ್ದ ಖಾಲಿ ವಾಹನದಲ್ಲಿ 15 ಮೂಟೆ ಕಸವನ್ನು ತೆಗೆದುಕೊಂಡು ಬಂದು ಕೊಡಗು ಜಿಲ್ಲೆ ಕೂಟುಹೊಳೆ ಸೇತುವೆ ಸಮೀಪದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದರು. ಕಸದ ರಾಶಿಯನ್ನು ಕಂಡ ಬ್ರಹ್ಮಗಿರಿ ವನ್ಯಜೀವಿ ವಲಯ & ಮಾಕುಟ್ಟ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

Also Read  ಕಡಬ: ಪ್ರಾಥಮಿಕ ಶಾಲಾ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅನ್ಯಾಯದ ಆರೋಪ- ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ SDMC ಸಮಿತಿ

 

error: Content is protected !!
Scroll to Top