ಮಂಗಳೂರು: ವಿದೇಶಿ ಕರೆನ್ಸಿ ಎಂದು ಕಾಗದ ಕಟ್ಟು ನೀಡಿ 4 ಲ.ರೂ. ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.31. ಅರೇಬಿಯಾ ದೇಶದ ಕರೆನ್ಸಿ ಮತ್ತು ಚಿನ್ನ ನೀಡುವುದಾಗಿ ಬಣ್ಣದ ಮಾತಗಳನ್ನಾಡಿ ಹಣ ಪಡೆದು ಕಾಗದದ ಕಟ್ಟನ್ನು ನೀಡಿ 4 ಲ.ರೂ. ವಂಚಿಸಿರುವ ಘಟನೆ ಕುರುತು ದೂರು ದಾಖಲಾಗಿದೆ.

ಮುಡಿಪು ಜಂಕ್ಷನ್‌ನಲ್ಲಿರುವ ತಾಜ್‌ಬುಕ್‌ ಸ್ಟಾಲ್‌ ಎಂಬ ಅಂಗಡಿಗೆ ಬಂದಿದ್ದ ಓರ್ವ ಅಪರಿಚಿತ ವ್ಯಕ್ತಿಯು ಆತನ ಬಳಿ ಸೌದಿ ಅರೇಬಿಯಾ ದೇಶದ ಕರೆನ್ಸಿ ಮತ್ತು ಚಿನ್ನ ಇದ್ದು ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿದ್ದ.

ಇದಾದ ಬಳಿಕ ಜ.29ರಂದು ಅಪರಿಚಿತ ವ್ಯಕ್ತಿ ಅಂಗಡಿಯಾತನಿಗೆ ಕರೆ ಮಾಡಿ 4 ಲ.ರೂ.ಗಳೊಂದಿಗೆ ಮಂಗಳೂರಿಗೆ ಬಂದು ಕರೆ ಮಾಡುವಂತೆ ತಿಳಿಸಿದ್ದು ಅದರಂತೆ ಅಂಗಡಿಯಾತ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ನಗರದ ಸ್ಟೇಟ್‌ಬ್ಯಾಂಕ್‌ ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಾಯುವಂತೆ ತಿಳಿಸಿದ.

Also Read  ಉಪ್ಪಿನಂಗಡಿಯ ನಾಗರಿಕರನ್ನು ದೇಶದ್ರೋಹಿಗಳಿಗೆ ಹೋಲಿಸಿದ ಶಾಸಕರ ಹೇಳಿಕೆ ವಾಪಸ್ ಪಡೆಯಬೇಕು- ಪಿಎಫ್ಐ ➤ ಸಂಘಪರಿವಾರದಲ್ಲಿ ಇರುವಷ್ಟು ದೇಶದ್ರೋಹಿಗಳು ಬೇರೆಲ್ಲೂ ಇಲ್ಲ- ಹಮೀದ್ ಮೆಜೆಸ್ಟಿಕ್

 

error: Content is protected !!
Scroll to Top