ಪದವು: ಬೈಕ್ ಗಳ ಮಧ್ಯೆ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.19. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿ ಬೈಕ್ ಮಧ್ಯೆ ಅಪಘಾತ ಉಂಟಾಗಿ ಎರಡೂ ಬೈಕಿನ ಸವಾರರೂ ಗಂಭೀರ ಗಾಯಗೊಂಡ ಘಟನೆ ಮಂಗಳವಾರದಂದು ನಡೆದಿದೆ.

ಗಾಯಗೊಂಡವರನ್ನು ಪುತ್ತೂರು ಒಕ್ಕಲಿಗ ಗೌಡ ಸಹಕಾರಿ ಸಂಘದ ಕಡಬ ಶಾಖೆಯ ಪಿಗ್ಮಿ ಸಂಗ್ರಾಹಕ ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಆರ್ದೇಲ್ ನಿವಾಸಿ ಈಶ್ವರ ಗೌಡರ ಪುತ್ರ ಬೆಳಿಯಪ್ಪ ಗೌಡ(32) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕಿನ ಸವಾರ ಪೆರಾಬೆ ನಿವಾಸಿ ಭುವನ್(22) ಎಂದು ಗುರುತಿಸಲಾಗಿದೆ. ಬೆಳಿಯಪ್ಪ ಗೌಡ ಅವರು ಆಲಂಕಾರಿನಲ್ಲಿ ಪಿಗ್ಮಿ ಸಂಗ್ರಹಿಸಿ ಕಡಬಕ್ಕೆ ವಾಪಾಸಾಗುತ್ತಿದ್ದಾಗ ಕುಂತೂರು ಪದವಿನಲ್ಲಿ ಅಂಗಡಿಯೊಂದಕ್ಕೆ ಹೋಗಲು ಬೈಕ್ ಆ ಕಡೆ ತಿರುಗಿಸುತ್ತಿದ್ದಾಗ ಹಿಂದಿನಿಂದ ಬಂದ ಭುವನ್ ಅವರ ಬೈಕ್ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೆಳಿಯಪ್ಪ ಗೌಡ ಕಾಲು ಮೂಲೆ ಮುರಿತಕ್ಕೊಳಗಾಗಿದೆ. ಭುವನ್ ಕೂಡಾ ಮಾರು ದೂರ ಹೋಗಿ ಬಿದ್ದು ಕೈಕಾಲು ಹಾಗೂ ತಲೆಗೆ ಗಂಭೀರ ಗಾಯವಾಗಿದೆ. ಇಬ್ಬರೂ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!

Join the Group

Join WhatsApp Group