‘ಆಕ್ಸಿಜನ್ ನೀಡದೆ 36 ಜನರ ಕೊಲೆ’ ➤ ಸುಧಾಕರ್ ವಿರುದ್ದ ಡಿಕೆಶಿ ಸಿಡಿಮಿಡಿ    

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಕೋವಿಡ್ ಸಮಯದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ನೀಡದೆ 36 ಜನರನ್ನ ಕೊಲೆ ಮಾಡಿದ್ದು, ಇದಕ್ಕೆ ಸಚಿವ ಕೆ. ಸುಧಾಕರ್ ಅವರೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ಚಾಮರಾಜನಗರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಪೀಡಿತರು ಮೃತಪಟ್ಟಿದ್ದಲ್ಲ, ಅದೊಂದು ವ್ಯವಸ್ಥಿತ ಕೊಲೆಯಾಗಿದೆ. ಮೊದಲು ಕೇವಲ 3 ಜನ ಮಾತ್ರ ಮೃತಪಟ್ಟಿದ್ದಾಗಿ ಹೇಳಿದ್ದು, ನಾವೆಲ್ಲ ಬಂದು ಮೃತರ ಕುಟುಂಬಸ್ಥರನ್ನ ಭೇಟಿಯಾಗಿ ಬಂದ ಬಳಿಕ 36 ಜನ ಸತ್ತಿರುವುದನ್ನ ಅಧಿಕಾರಿಗಳು ದೃಢಪಡಿಸಿದರು ಎಂದು ದೂರಿದರು.

error: Content is protected !!

Join the Group

Join WhatsApp Group