ನಾಳೆ ರಾಜ್ಯಕ್ಕೆ ಶಾ ಭೇಟಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಮುಂದಿನ ವಿಧಾನಸಭಾ ಚುನವಣೆಯ ಗೆಲುವಿನ ಮೇಲೆ ಕಣ್ಣಿಟ್ಟು ಕೇಂದ್ರ ಬಿಜೆಪಿ ನಾಯಕರಗಳು ರಾಜ್ಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದು, ನಾಳೆ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ತಿಂಗಳಲ್ಲಿ ಅವರದ್ದು 2ನೇ ರಾಜ್ಯ ಭೇಟಿಯಾಗಿದೆ.

ಪ್ರಧಾನಿ ಮೋದಿ ಒಂದು ವಾರದಲ್ಲಿ ರಾಜ್ಯಕ್ಕೆ 2 ಸಲ ಭೇಟಿ ನೀಡಿದ್ದರು. ಹಾಗೆಯೇ ಜೆ.ಪಿ. ನಡ್ಡಾ ಸಹ ಈ ತಿಂಗಳಲ್ಲೇ 3 ಬಾರಿ ರಾಜ್ಯಕ್ಕೆ ಬಂದಿದ್ದರು. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ನಡೆಯುವ ವಿಜಯಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗುವರು.

Also Read  ಕಳ್ಳನೋರ್ವನ ಮೇಲೆ ಮನೆ ಮಾಲೀಕನಿಂದ ಗುಂಡಿನ ದಾಳಿ  

ಬಿಜೆಪಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ರಾಜ್ಯ ಪ್ರವಾಸದ ಬಗ್ಗೆ ಮಾಹಿತಿ ನೀಡಿದ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ನಾಳೆ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಧಾರವಾಡದಲ್ಲಿ ವಿಧಿ-ವಿಜ್ಞಾನ ಪ್ರಯೋಗಾಲಯದ ಶಂಕುಸ್ಥಾಪನೆ ನೆರವೇರಿಸಿ, ಕುಂದಗೋಳದಲ್ಲಿ ರೋಡ್ ಶೋನಲ್ಲಿ ಭಾಗವಹಿಸುವರು ಎಂದರು.

 

 

error: Content is protected !!
Scroll to Top