ಕೇಂದ್ರದಿಂದ ‘ಪದ್ಮ ಪ್ರಶಸ್ತಿ’ ಘೋಷಣೆ ➤ 6 ಕನ್ನಡಿಗರು ಸೇರಿ 106 ಸಾಧಕರಿಗೆ ಗೌರವ

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.26. 74ನೇ ಗಣರಾಜ್ಯೋತ್ಸವದ ಮುನ್ನ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮ ಪುರಸ್ಕೃತರನ್ನ ಘೋಷಿಸಿದ್ದು, ಕನ್ನಡಿಗರಾದ ಸುಧಾ ಮೂರ್ತಿ, ಎಸ್. ಎಂ ಕೃಷ್ಣ, ಎಸ್.ಎಲ್ ಬೈರಪ್ಪ, ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ ಸೇರಿ 106 ಸಾಧಕರು ಪ್ರಶಸ್ತಿಗೆ ಅರ್ಹರಾಗಿದ್ದಾರೆ.

6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳಲ್ಲಿ ಒಟ್ಟಾರೆ 19 ಪ್ರಶಸ್ತಿ ಪುರಸ್ಕೃತರು ಮಹಿಳೆಯರಾಗಿದ್ದಾರೆ. ಈ ಪಟ್ಟಿಯಲ್ಲಿ ವಿದೇಶಿಯರು / ಎನ್‌ಆರ್‌ಐ / ಪಿಐಒ / ಒಸಿಐ ವರ್ಗದಿಂದ 2 ವ್ಯಕ್ತಿಗಳು ಮತ್ತು 7 ಮರಣೋತ್ತರ ಪ್ರಶಸ್ತಿ ವಿಜೇತರು ಸೇರಿದ್ದಾರೆ ಎನ್ನಲಾಗಿದೆ.

Also Read  ಐಸ್ ಕ್ರೀಮ್ ದಾಸ್ತಾನು ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ..!   ➤ ಅಪಾರ ನಷ್ಟ

error: Content is protected !!
Scroll to Top