ಸುಳ್ಯ: ಗುಂಡು ಹಾರಿಸಿಕೊಂಡು ಯುವ ನ್ಯಾಯವಾದಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.17. ಯುವ ವಕೀಲರೋರ್ವರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಡರಾತ್ರಿ ಸುಳ್ಯ ಸಮೀಪದ ಸಂಪಾಜೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಸಂಪಾಜೆಯ ಎನ್.ಎಸ್.ದೇವಿಪ್ರಸಾದ್ ಎಂಬವರ ಪುತ್ರ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಎನ್.ಡಿ. ಚರಣ್ ಎಂದು ಗುರುತಿಸಲಾಗಿದೆ. ಇವರು ಶನಿವಾರದಂದು ತಡರಾತ್ರಿ ಸಂಪಾಜೆಯ ತನ್ನ ಮನೆಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Also Read  ಸುಬ್ರಹ್ಮಣ್ಯ: ಪಾರ್ಕಿಂಗ್‌ ಮಾಡಿದ್ದ ಓಮ್ನಿ ಕಳವು -ಪ್ರಕರಣ ದಾಖಲು

error: Content is protected !!
Scroll to Top