ಕೊಡಗು: ಯುವತಿಯ ಬರ್ಬರ ಹತ್ಯೆ- ಕಾರಣ ನಿಗೂಢ

(ನ್ಯೂಸ್ ಕಡಬ) newskadaba.com ಕೊಡಗು, ಜ. 16. ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಯುವತಿಯನ್ನು ನಾಂಗಲ ಗ್ರಾಮದ ಬುಟ್ಟಿಯಂಡಪ್ಪ ಮಾದಪ್ಪ, ಸುನಂದ ಅವರ ಪುತ್ರಿ ಆರತಿ (24) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ತಮ್ಮಯ್ಯ ಎನ್ನಲಾಗಿದ್ದು, ಈತನೂ ಆತ್ಮಹತ್ಯೆ ಮಾಡಿರುವ ಶಂಕೆ‌ ಇದೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Also Read  ತನ್ನನ್ನು "ರಾಗಿಣಿ" ಇರುವ ಸೆಲ್ ಗೆ ವರ್ಗಾಹಿಸುವಂತೆ "ಆಡಂ ಪಾಷಾ" ಕಿರಿಕ್

error: Content is protected !!
Scroll to Top