ಕಡಬದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಥಳದ ಗಡಿಗುರುತು ► ತಿಂಗಳೊಳಗೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ: ಪಿ.ಪಿ.ವರ್ಗೀಸ್

(ನ್ಯೂಸ್ ಕಡಬ) newskadaba.com ಕಡಬ, ಡಿ.15. ಕಡಬ ಅಂಬೇಡ್ಕರ್ ಭವನದ ಹತ್ತಿರ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಖಾದಿರಿಸಿದ 1.73 ಎಕ್ರೆ ಸ್ಥಳವನ್ನು ಭೂಮಾಪನಾ ಇಲಾಖೆಯಿಂದ ಸರ್ವೇ ಮಾಡಿ ಗಡಿ ಗುರುತು ಮಾಡುವ ಕಾರ್ಯ ಬುಧವಾರದಂದು ನಡೆಯಿತು.

ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರವರ ನೇತೃತ್ವದಲ್ಲಿ ಭೂಮಾಪನಾ ಇಲಾಖೆ ಹಾಗೂ ಕೆಎಸ್ಆರ್ಟಿಸಿ ವತಿಯಿಂದ ಜಂಟಿ ಸರ್ವೇ ನಡೆಸಿ ಬಸ್ ನಿಲ್ದಾಣಕ್ಕೆ ಗಡಿ ಗುರುತು ಮಾಡುವುದರ ಮೂಲಕ ಭೂಮಿ ಕಾದಿರಿಸಲಾಯಿತು. ಈ ಸಂದರ್ಭ ಮಾತನಾಡಿದ ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಕೆಎಸ್ಆರ್ಟಿಸಿ ಗೆ ಖಾದಿರಿಸಿದ ಸ್ಥಳದಲ್ಲಿ ಮುಂದಿನ 1 ತಿಂಗಳೊಳಗಾಗಿ ಬಸ್ ನಿಲ್ದಾಣದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಶೆರೀಪ್ ಎ.ಎಸ್, ಶಾಲಿನಿ ಸತೀಶ್ ನಾೖಕ್, ಪ್ರಮುಖರಾದ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಭೂಮಾಪಕರಾದ ನವೀನ್ ಮೊದಲಾದವರು ಉಪಸ್ಥಿತರಿದ್ದರು.

Also Read  ಬಂಟ್ವಾಳದಲ್ಲೊಂದು ವಾರಸುದಾರರಿಲ್ಲದ ಅನುಮಾನಸ್ಪದ ಕಾರು ಪತ್ತೆ ➤ಸ್ಯಾಂಟ್ರೋ ರವಿ ಕಾರು ಶಂಕೆ!

error: Content is protected !!
Scroll to Top