ಒಂಟಿ ಮಹಿಳೆಯೋರ್ವಳನ್ನು ಹತ್ಯೆ ಮಾಡಿ ನಂತರ ಮೃತದೇಹಕ್ಕೆ ಬೆಂಕಿ ಹಚ್ಚಿದ ಪಾಪಿಗಳು..!!

(ನ್ಯೂಸ್ ಕಡಬ) newskadaba.com ಮಂಡ್ಯ, ಜ.10. ಒಬ್ಬಂಟಿ ಮಹಿಳೆಯೋರ್ವಳನ್ನು ಹತ್ಯೆ ಮಾಡಿ ಹಾಸಿಗೆಯಲ್ಲಿ ಮಲಗಿಸಿ ನಂತರ ಮೃತದೇಹಕ್ಕೆ ಬೆಂಕಿ ಹಚ್ಚಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯ ಗ್ರಾಮದ ಬಳಿ ವರದಿಯಾಗಿದೆ.

ಮೃತರನ್ನು ಪ್ರೇಮ(42) ಎಂದು ಗುರುತಿಸಲಾಗಿದೆ. ಮೃತ ಪ್ರೇಮರ ದೇಹವು ಸಂಪೂರ್ಣ ಸುಟ್ಟು ಹೋಗಿದ್ದು ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ನಿಧನದ ಬಳಿಕ ಒಂಟಿಯಾಗಿದ್ದ ಪ್ರೇಮ ಅವರ ಓರ್ವ ಪುತ್ರನೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು ಎನ್ನಲಾಗಿದೆ.

Also Read  ರತನ್‌ ಟಾಟಾ ಪರಂಪರೆ ಮುಂದುವರಿಸಿಕೊಂಡು ಹೋಗಲು ಟಾಟಾ ಟ್ರಸ್ಟ್ ಅವಿರತವಾಗಿ ಶ್ರಮಿಸಲಿದೆ -ಮುಖ್ಯ ಕಾರ್ಯ ನಿರ್ವಾಹಕ

error: Content is protected !!
Scroll to Top