ಉಪ್ಪಿನಂಗಡಿ: ಹೆಚ್ಚಾದ ಹುಚ್ಚು ನಾಯಿ ಹಾವಳಿ..! ➤ ಹಲವರಿಗೆ ಕಡಿತ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜ. 09. ಹುಚ್ಚುನಾಯಿಯ ಹಾವಳಿ ಮತ್ತೆ ಆರಂಭವಾಗಿದ್ದು,  ಐದಾರು ಮಂದಿಗೆ ಹುಚ್ಚು ನಾಯಿಯೊಂದು ಕಚ್ಚಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ದ್ವಿಚಕ್ರ ವಾಹನ ಚಲಾಯಿಸಲು ಮುಂದಾಗಿದ್ದ ಪತ್ರಕರ್ತರೋರ್ವರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿ ಅವರ ಕಾಲನ್ನು ಕಚ್ಚಿ ಗಂಭೀರ ಗಾಯಗೊಳಿಸಿದೆ. ಗಾಯಾಳುವನ್ನು ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿ ಓಡಿ ಹೋಗುವ ಸಮಯದಲ್ಲಿ ಸ್ಥಳದಲ್ಲೇ ಇದ್ದ ಕಾರ್ಮಿಕನಿಗೆ ಕಚ್ಚಿದ್ದು, ಬೆನ್ನಟ್ಟಿಕೊಂಡು ಬಂದ ತಂಡ ಕೊನೆಗೂ ನಾಯಿಯನ್ನು ದೊಣ್ಣೆಯಿಂದ ಸಾಯಿಸುವಲ್ಲಿ ಯಶಸ್ವಿಯಾಯಿತು ಎನ್ನಲಾಗಿದೆ.

Also Read  48 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಾನೂನು ಕ್ರಮ ➤ NHM ಸಿಬ್ಬಂದಿಗಳಿಗೆ ಖಡಕ್ ಸೂಚನೆ

 

error: Content is protected !!
Scroll to Top