ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಬೆಳ್ತಂಗಡಿಗೆ ಭೇಟಿ..!

(ನ್ಯೂಸ್ ಕಡಬ)newskadaba.com  ಬೆಳ್ತಂಗಡಿ, ಜ.09. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಕಛೇರಿಗೆ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಅವರು ಭೇಟಿ ನೀಡಿದರು ಎಂದು ವರದಿಯಾಗಿದೆ.

ರಿಯಾಜ್ ಕಡಂಬು ಅವರು ನೆರೆದಿದ್ದ ಕಾರ್ಯಕರ್ತರಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವ ಕುರಿತು ಮತ್ತು ಪಕ್ಷ ಸಂಘಟಿಸುವಿಕೆಯ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಶರೀಫ್ ಕಟ್ಟೆ, ನಿಕಟ ಪೂರ್ವ ಅಧ್ಯಕ್ಷರಾದ ನಿಸಾರ್ ಕುದ್ರಡ್ಕ, ಜೊತೆ ಕಾರ್ಯದರ್ಶಿಗಳಾದ ಪಝಲ್ ರಹಮಾನ್ ಉಜಿರೆ, ಆಶ್ರಫ್ ಕಟ್ಟೆ, ಪಕ್ಷದ ಬ್ಲಾಕ್ ಸಮಿತಿ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ವರದಿ ತಿಳಿಸಿದೆ.

Also Read  ನನಗೆ ನ್ಯಾಯ ಸಿಕ್ಕಿದೆ: ನನ್ನ ಹೋರಾಟ ಇನ್ನೂ ಜೀವಂತ; ಜಾಮೀನಿನ ಮೇಲೆ ಲಾಯರ್ ಜಗದೀಶ್ ಬಿಡುಗಡೆ

 

error: Content is protected !!
Scroll to Top