ಮಡಿಕೇರಿ: ಹಿಂದೂ ಧರ್ಮ ಅವಹೇಳನ ಆರೋಪ ➤  ಆರೋಪಿ ಅರೆಸ್ಟ್..!!

crime, arrest, suspected

(ನ್ಯೂಸ್ ಕಡಬ) newskadaba.com ಕೊಡಗು, ಜ.08. ಹಿಂದೂ ಧರ್ಮದ ಅವಹೇಳನ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿದ ಘಟನೆ ಕೊಡಗಿನಲ್ಲಿ ವರದಿಯಾಗಿದೆ. ಬಂಧಿತ ಆರೋಪಿ ನಿಶಾಂತ್ ಹಿಂದೂ ಧರ್ಮ ಅವಹೇಳನ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ ಎನ್ನಲಾಗಿದೆ.

ಕ್ರೈಸ್ತ ಧರ್ಮದ ಪುಸ್ತಕ ಮಾರಾಟ ಮಾಡುವ ವೇಳೆ ಅವಹೇಳನ ಆರೋಪವಿದ್ದು, ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಿಶಾಂತ್ ಪುಸ್ತಕ ಮಾರುತ್ತಿದ್ದ. ಈ ವೇಳೆ ಹಿಂದೂ ದೇವತೆಗಳಿಂದ ಮನುಷ್ಯನ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲ ಎಂದು ಜನರಿಗೆ ಹೇಳಿ ಕ್ರೈಸ್ತಧರ್ಮದ ಬೆಳಕು ಪುಸ್ತಕ ಮಾರಾಟಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ಮಡಿಕೇರಿಯ ಸುಭಾಷ್ ನಗರದ ಕುಮಾರ್ ನಿಶಾಂತ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪುಸ್ತಕ ಮಾರುತ್ತಿದ್ದ ನಿಶಾಂತ್‌ನನ್ನು ಬಂಧಿಸಲಾಗಿದೆ. ಸದ್ಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top