’ಅಗ್ನಿಪಥ’ ಯೋಜನೆ ಯುವಕರ ವೃತ್ತಿಜೀವನವನ್ನು ಹಾಳುಮಾಡುತ್ತಿದೆ ➤  ರಾಹುಲ್ ಗಾಂಧಿ..!!

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.07.  ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಪರಿಚಯಿಸಿದ ಸುಮಾರು ಆರು ತಿಂಗಳ ನಂತರ, ರಾಹುಲ್ ಗಾಂಧಿ ಅವರು ಯೋಜನೆಯ ಬಗ್ಗೆ ಟೀಕೆ ಮುಂದುವರಿಸಿದ್ದು, ಇದಕ್ಕೆ ಬಿಜೆಪಿ ಅವರನ್ನು “ಸೇನಾ ವಿರೋಧಿ” ಎಂದು ಆರೋಪಿಸಿದೆ ಎನ್ನಲಾಗಿದೆ.

ತಮ್ಮ ಭವಿಷ್ಯ ಹಾಳಾಗಿದೆ ಎಂದು ಸೇನೆಯ ಯುವ ಅಭ್ಯರ್ಥಿಗಳು ತಮ್ಮ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.  ಪಾಣಿಪತ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ “ಮೊದಲು ಅಗ್ನಿಪಥ್ ಯೋಜನೆ ಏನೆಂದು ನನಗೆ ಅರ್ಥ ಮಾಡಿಸಿ ಎಂದರು. ‘ರಾಷ್ಟ್ರದ ಯುವಶಕ್ತಿಯ ಸಾಮರ್ಥ್ಯ ವ್ಯರ್ಥವಾಗುತ್ತಿದೆ. ಬಿಜೆಪಿಯವರು ತಮ್ಮ ನಾಯಕರು ದೇಶಭಕ್ತರು ಎಂದು ಹೇಳುತ್ತಾರೆ. ಅವರ ದೇಶಭಕ್ತಿ ನನಗೆ ಅರ್ಥವಾಗುವಂತೆ ಮಾಡಿ ಎಂದಿದ್ದಾರೆ ಎನ್ನಲಾಗಿದೆ.

Also Read  ಪ್ರಿಯಕರನ ಜೊತೆ ಸೇರಿದ ಗಂಡನನ್ನು ಕೊಂದ ಪಾಪಿ ಪತ್ನಿ ➤ 10 ವರ್ಷಗಳ ನಂತರ ಪೊಲೀಸರ ಬಲೆಗೆ

 

 

error: Content is protected !!
Scroll to Top