“ಮೂರ್ತಿ ಬಿಟ್ಟು ಬೇರೆ ಯಾರೂ ನನಗೆ ತಾಳಿ ಕಟ್ಟಬಾರದು” ➤ ದೇವರಿಗೆ ವಿಚಿತ್ರ ಪತ್ರ ವೈರಲ್

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಡಿ. 30. ಭಕ್ತರೊಬ್ಬರು ವಿಚಿತ್ರ ಬೇಡಿಕೆಯ ಪತ್ರವೊಂದನ್ನು ಹುಂಡಿಗೆ ಹಾಕಿದ ಘಟನೆ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮ ದೇವಾಲಯದಲ್ಲಿ ಸಂಭವಿಸಿದೆ.

 

ಈ ಪತ್ರದಲ್ಲಿ ‘ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ಕೂಡ ತಾಳಿ ಕಟ್ಟಬಾರದು’ ಎಂದು ಬರೆಯಲಾಗಿತ್ತು. ಇದೀಗ ಮಾಯಮ್ಮ ದೇವಾಲಯದಲ್ಲಿ ಭಕ್ತರೊಬ್ಬರು ವಿಚಿತ್ರ ಬೇಡಿಕೆಯ ಪತ್ರವನ್ನು ಹುಂಡಿಗೆ ಹಾಕಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

error: Content is protected !!
Scroll to Top