“ಮೂರ್ತಿ ಬಿಟ್ಟು ಬೇರೆ ಯಾರೂ ನನಗೆ ತಾಳಿ ಕಟ್ಟಬಾರದು” ➤ ದೇವರಿಗೆ ವಿಚಿತ್ರ ಪತ್ರ ವೈರಲ್

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಡಿ. 30. ಭಕ್ತರೊಬ್ಬರು ವಿಚಿತ್ರ ಬೇಡಿಕೆಯ ಪತ್ರವೊಂದನ್ನು ಹುಂಡಿಗೆ ಹಾಕಿದ ಘಟನೆ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮ ದೇವಾಲಯದಲ್ಲಿ ಸಂಭವಿಸಿದೆ.

 

ಈ ಪತ್ರದಲ್ಲಿ ‘ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ಕೂಡ ತಾಳಿ ಕಟ್ಟಬಾರದು’ ಎಂದು ಬರೆಯಲಾಗಿತ್ತು. ಇದೀಗ ಮಾಯಮ್ಮ ದೇವಾಲಯದಲ್ಲಿ ಭಕ್ತರೊಬ್ಬರು ವಿಚಿತ್ರ ಬೇಡಿಕೆಯ ಪತ್ರವನ್ನು ಹುಂಡಿಗೆ ಹಾಕಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Also Read  ಅಗ್ನಿವೀರ ನೇಮಕಾತಿ- ಆನ್ಲೈನ್ ನೋಂದಣಿ ಆರಂಭ

error: Content is protected !!
Scroll to Top